Pages

Tuesday, May 19, 2020

ನಾರಾಯಣ ನಿನ್ನ ನಾಮದ ಸ್ಮರಣೆಯ / Narayana Ninna Namada Smaraneya

ನಾರಾಯಣ ನಿನ್ನ ನಾಮದ ಸ್ಮರಣೆಯ


ರಚನೆ : ಶ್ರೀ ಪುರಂದರ  ದಾಸರು

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ ||1||

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||2||


Narayana Ninna Namada Smaraneya

Author : Shree Purandara Dasaru

Narayana ninna nAmada smaraNeya
saaraamrutavu enna naaligege barali ||

kashTadallirali utkrushTa-dallirali
eshTaadarU matikeTTu irali
krishNa krishNa endu shiShTaru pELuva
ashTaakshara mahA mantrada nAmava ||1||

santata hari ninna saasira naamava
antarangada oLagirisi
entO purandara viTala rAyana
antya kAladalli chintisO hAnge ||2||

Listen to song by Shri Vidyabhushana



Listen to song by Shri MS Subba Lakshmi


ಇದೇ ಹಾಡಿನ ಇನ್ನೊಂದು ಆವೃತ್ತಿ 

ರಾಗ : ಶುದ್ಧಧನ್ಯಾಸಿ
ತಾಳ : ಖಂಡ ಛಾಪು
ರಚನೆ : ಪುರಂದರ ದಾಸರು

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ||ಪ ||

ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ ಮಾಡಿದ ಪಾಪ ಬಿಟ್ಟೋಡಿ ಹೋಗೊಹಾಗೆ||

ಊರಿಗೆ ಹೋಗಲಿ ಊರೊಳಗಿರಲಿ ಹಗೆಬಂದಗಲಿ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ ಸಾರಿ ಸಾರಿಗೆ ನಾ ಬೀಸರದಾಗೆ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಕೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ||

ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠ್ಠಲ ರಾಯನ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ||



No comments:

Post a Comment